ಲಕ್ಷ್ಮೇಶ್ವರ: ಸೂಕ್ತ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಂದ ₹5 ಲಕ್ಷ ನಗದನ್ನು ತಾಲ್ಲೂಕಿನ ರಾಮಗೇರಿ ಚೆಕ್ಪೋಸ್ಟ್ನಲ್ಲಿ ಗುರುವಾರ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಧಾರವಾಡ ಜಿಲ್ಲೆ ಮುಗದ ಗ್ರಾಮದಿಂದ ಸೈಯದ್ಅಬ್ದುಲ್ರಜಾಕ್ ಎಸ್. ಪೀರ್ಜಾಧೆ ಎಂಬುವವರು ಬಸ್ನಲ್ಲಿ ಹಣ ತರುತ್ತಿರುವಾಗ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ ಹಣ ಎಂಬುದು ಗೊತ್ತಾಗಿ ಅಧಿಕಾರಿಗಳು ವಶಪಡಿಸಿಕೊಂಡರು.