ಬಿಪಿ, ಸುಗರ್, ಅಲರ್ಜಿ, ಚರ್ಮ ರೋಗ ಹೀಗೆ ಇನ್ನೂ ಹಲವು ರೋಗಗಳ ನಿಯಂತ್ರಣಕ್ಕಾಗಿ ರೋಗಿಗಳು ಔಷಧ ಸೇವಿಸಲೇಬೇಕಾದ ಅನಿವಾರ್ಯತೆ ಇದೆ. ಜನೌಷಧ ಕೇಂದ್ರದಲ್ಲಿ ಔಷಧಗಳು ಬಡ ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಆಗುತ್ತಿದ್ದವು. ಆದರೆ ಕೇಂದ್ರ ಬಂದ್ ಆದಾಗಿನಿಂದ ದುಬಾರಿ ಬೆಲೆ ತೆತ್ತು ರೋಗಿಗಳು ಔಷಧ ಖರೀದಿಸಬೇಕಾಗಿದೆ.