ಗ್ರಾಮ ಪಂಚಾಯಿತಿ ಗ್ರಾಮದಲ್ಲಿನ ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಇದರಿಂದಾಗಿ ಗ್ರಾಮದ ಪ್ರಮುಖ ವಠಾರಗಳಲ್ಲಿ ಚರಂಡಿ ನೀರು ಹರಿಯುತ್ತಿದ್ದು ಪ್ರಜ್ಞಾವಂತ ಜನ ಶಪಿಸುವಂತಾಗಿದೆ. ಗ್ರಾಮದ ಕೆರೆಯ ಅಂಗಳ ನೋಡಿದರೆ ಸಾಕು ಗ್ರಾಮದಲ್ಲಿ ಎಷ್ಟು ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತದೆ ಆದರೆ ಅಧಿಕಾರಿಗಳು ಮಾತ್ರ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿಲ್ಲ
ಮಲ್ಲಣ್ಣ, ಗ್ರಾಮಸ್ಥರು
ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲು ಹಾಗೂ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಕ್ಷಣವೇ ಸೂಚಿಸಲಾಗುವುದು ಗ್ರಾಮದ ಕೆರೆಗೆ ಮುಂಬರುವ ಕ್ರಿಯಾ ಯೋಜನೆಯಲ್ಲಿ ತಂತಿ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು
ಚಂದ್ರಶೇಖರ ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ರೋಣ
ಗ್ರಾಮದ ಕೆರೆ ದಂಡೆಯಲ್ಲಿ ತಂದು ಸುರಿದಿರುವ ಸಾರಾಯಿ ತ್ಯಾಜ್ಯ
ಕುರಹಟ್ಟಿ ಗ್ರಾಮದ ಅಂಗನವಾಡಿ ಮುಂದಿನ ಚರಂಡಿ ಸಂಪೂರ್ಣವಾಗಿ ಕೊಳೆಚೆಯಿಂದ ಮುಚ್ಚಿ ಹೋಗಿರುವುದು.