ಜೀವನಕ್ಕೆ ಅಗತ್ಯ ವಸ್ತು ಖರೀದಿಯಲ್ಲಿ ನಾವು ಹೇಗೆ ಜಾಗೃತಿ ವಹಿಸುತ್ತಿವೆಯೋ ಅದೇ ರೀತಿಯಲ್ಲಿ ಜನಪ್ರತಿನಿಧಿ ಆಯ್ಕೆ ಕೂಡ ಉತ್ತಮವಾಗಿರಬೇಕು. ಆ ಆಯ್ಕೆಯು ಒಂದೇ ಆಗಿರಬೇಕು. ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡುವುದೇ ಸವಾಲು ಆಗಿರುತ್ತದೆ. ಮತದಾರ ಯಾವುದೋ ಆಮಿಷಕ್ಕೆ ಒಳಗಾದರೆ ಇಡೀ ಸಮಾಜ ತೊಂದರೆ ಅನುಭವಿಸಬೇಕಾಗುತ್ತದೆ. ಒಂದು ಮತ ಅಭ್ಯರ್ಥಿಯ ಆಯ್ಕೆಯನ್ನೂ ನಿರ್ಣಯಿಸುತ್ತದೆ. ಪ್ರತಿ ಮತ ಕೂಡ ಮೌಲ್ಯಯುತ ಆಗಿರುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾವಣೆ ಮಾಡುವ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು.