ಶಿವರಾತ್ರಿ ಹಬ್ಬಕ್ಕಾಗಿ ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ, ಖರ್ಜೂರ, ಕರಬೂಜ, ಚಿಕ್ಕು ಸೇರಿದಂತೆ ಮತ್ತಿತರ ಹಣ್ಣುಗಳ ಮಾರಾಟ ಭರದಿಂದ ನಡೆದಿದೆ. ಈ ಬಾರಿ ಕಲ್ಲಂಗಡಿ ಹಣ್ಣಿನ ಇಳುವರಿ ಸ್ವಲ್ಪ ಹೆಚ್ಚಿಗೆ ಬಂದಿದ್ದು ಬೆಲೆ ಕಡಿಮೆಯಿದೆ. ಉಳಿದ ಹಣ್ಣುಗಳ ಬೆಲೆ ಸ್ವಲ್ಪ ಏರುಮುಖವಾಗಿದೆ. ಗುರುವಾರ ಪಟ್ಟಣದ ಮಾರುಕಟ್ಟೆಯಲ್ಲಿ ಜನರು ಹಣ್ಣು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.