ಗದಗ ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಿಗ್ಗೆಯಿಂದ ಬಿರುಸಿನ ಮಳೆಯಾಗುತ್ತಿದೆ.
ಅವಳಿ ನಗರದಲ್ಲಿ ಬೆಳಿಗ್ಗೆ ಒಂಬತ್ತಕ್ಕೆ ಶುರುವಾದ ಮಳೆ ಹತ್ತು ಗಂಟೆವರೆಗೆ ಜೋರಾಗಿ ಸುರಿಯಿತು. ಮಳೆ ಜತೆಗೆ ಗುಡುಗು, ಸಿಡಿಲಿನ ಆರ್ಭಟವೂ ಇತ್ತು.
ಮುಂಡರಗಿ ತಾಲ್ಲೂಕಿನ ಕೇಲೂರು ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಜಾನುವಾರುಗಳು ಸತ್ತಿವೆ.ಲಕ್ಷ್ಮೇಶ್ವರ, ರೋಣ, ಮುಳಗುಂದ ಭಾಗದಲ್ಲೂ ಜೋರು ಮಳೆಯಾಗಿದೆ