ತಂದೆ ದಾದಾಜಿರಾವ್ ಭಾವೆ ನಿಧನದ ನಂತರ 1842ರಲ್ಲಿ ಭಾಸ್ಕರ್ರಾವ್ ನರಗುಂದದ ಅಧಿಪತಿಯಾದರು.ನಂತರ ಇದ್ದೊಬ್ಬ ಮಗ ಅಕಾಲಿಕ ಮರಣಕ್ಕೆ ತುತ್ತಾದನು. ಬೇರೆ ಮಗುವನ್ನು ದತ್ತು ಪಡೆಯಲು ಮುಂದಾದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ನೀತಿ ಅಡ್ಡ ಬಂತು. ಇದರ ವಿರುದ್ಧ ಬಂಡಾಯ ಎದ್ದರು. ಬ್ರಿಟಿಷ್ ಆಡಳಿತ 1858ರಲ್ಲಿ ನರಗುಂದ ಸಂಸ್ಥಾನಕ್ಕೆ ಒಬ್ಬ ಆಡಳಿತಾಧಿಕಾರಿ ನೇಮಕ ಮಾಡಿತು. ಬ್ರಿಟಿಷರನ್ನು ಸದೆ ಬಡಿಯಲು ಮ್ಯಾನಸನ್ ಎಂಬ ಅಧಿಕಾರಿ ಸುರೇಬಾನದ ಹನಮಂತನ ಗುಡಿಯಲ್ಲಿ ಬೀಡುಬಿಟ್ಟನು. ಇದನ್ನರಿತ ಬಾಬಾಸಾಹೇಬ ಮ್ಯಾನಸನ್ ನರಗುಂದಕ್ಕೆ ಬರುವವರೆಗೂ ಕಾಯದೇ, ತನ್ನ ಬಂಟ ವಿಷ್ಣು ಕುಲಕರ್ಣಿ ಜತೆ ಸುರೇಬಾನಕ್ಕೆ ತೆರಳಿ ಮ್ಯಾನಸನ್ ರುಂಡ ಕತ್ತರಿಸಿ ನರಗುಂದಕ್ಕೆ ತಂದು ಅಗಸಿ ಬಾಗಿಲಿಗೆ ತೂಗು ಹಾಕಿದನು.