ಈ ಗ್ರಾಮದಲ್ಲಿ ಮೊದಲು ಭೂ ವಿಜ್ಞಾನಿಗಳು ಎರಡು ಮೂರು ಕಡೆ ನೀರಿನ ಮೂಲ ಗುರುತಿಸಿದ್ದರು. ಆದರೆ ಅಲ್ಲಿ 400–500 ಅಡಿ ಕೊರೆಯಿಸಿದರೂ ನೀರು ಸಿಗದ ಕಾರಣ ಕಂಗೆಟ್ಟ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸದಸ್ಯರು, ಸ್ಥಳೀಯರು ರೋಣ ತಹಶೀಲ್ದಾರ್ ಶಿವಲಿಂಗ ವಾಲಿ ಅವರನ್ನು ಭೇಟಿಯಾಗಿ, ಸ್ವಾಮೀಜಿ ಮತ್ತು ಪೂಜಾರಿಗಳ ನೆರವು ಪಡೆಯೋಣ ಎಂದು ಸಲಹೆ ನೀಡಿದರು.