ಕೇಂದ್ರ ಬಜೆಟ್ ನಿಂದ ರೈತರಿಗೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಿಲ್ಲ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮೊದಲಾದ ಕಡೆಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಹಾಲಿ ರಾಷ್ಟ್ರ ಆಳುತ್ತಿರುವ ನಾಯಕರು ಹೇಳಿದ್ದರು. ಆದರೆ, ರಾಜ್ಯದಲ್ಲಿ ಕನಿಷ್ಠ ರೈತರು ಪಡೆದಿರುವ ಬ್ಯಾಂಕ್ ಬಡ್ಡಿಯನ್ನೂ ಮನ್ನಾ ಮಾಡಿಲ್ಲ. ಇಂಧನ ಬೆಲೆ ಸೇರಿದಂತೆ ಸಾಮಾನ್ಯ ಜನರಿಗೆ ಪೂರಕವಾಗುವ ಯಾವುದೇ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.