ಮುಖಂಡ ಹೊನ್ನಿಕೊಪ್ಪಲು ಮಂಜೇಗೌಡ ಮಾತನಾಡಿ, ರೌಡಿಗಳಿಂದ ಹೊಡೆಸಿ ಓಟು ಹಾಕಿಸ್ತಾರೆ, ಬೂತ್ಗಳನ್ನು ಎತ್ತಿಕೊಂಡು ಹೋಗ್ತಾರೆ, ಜೆಡಿಎಸ್ ಕುಟುಂಬ ರಣರಾಕ್ಷಸರ ಕುಟುಂಬ ಎಂದು ಲೇವಡಿ ಮಾಡಿದರು. ಇವರ ದರ್ಪ, ದೌರ್ಜನ್ಯಕ್ಕೆ ಲಗಾಮು ಹಾಕಲು ಶ್ರೇಯಸ್ ಪಟೇಲ್ ರನ್ನು ಗೆಲ್ಲಿಸುವ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡ ಎಂ.ಟಿ.ಕೃಷ್ಣೇಗೌಡ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮೊಹಮದ್ ದಾವುದ್, ವೈದ್ಯಕೀಯ ಘಟಕದ ಜಿಲ್ಲಾದ್ಯಕ್ಷ ಡಾ. ದಿನೇಶ್ ಭೈರೇಗೌಡ, ಯವ ಘಟಕದ ಅದ್ಯಕ್ಷ ರಂಜಿತ್, ಕುರುಬ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ಮುಖಂಡರಾದ ಜಾವಗಲ್ ಮಂಜುನಾಥ್, ದಿವಾಕರ್ ಗೌಡ, ಬಿಳಗುಲಿ ರಾಮೇಗೌಡ, ವಕೀಲ ರಾಜೇಶ್ ಭಾಗವಹಿಸಿದ್ದರು.