ಜಾವಗಲ್: ಗ್ರಾಮದ ಕೆರೆ ಏರಿ ತಿರುವಿನಲ್ಲಿ ಕಾರ್ಬನ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಬುಧವಾರ ಮಗುಚಿ ಬಿತ್ತು.
ಮಂಗಳೂರು ಕಡೆಯಿಂದ ಜಾವಗಲ್ ಮಾರ್ಗವಾಗಿ ಬಳ್ಳಾರಿಗೆ ಹೋಗುತ್ತಿದ್ದ ಮಹಾರಾಷ್ಟ್ರ ಮೂಲದ ಆಯಿಲ್ ಟ್ಯಾಂಕರ್ ಕೆರೆ ಏರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
‘ಈ ಸ್ಥಳದಲ್ಲಿ ಹಲವಾರು ವಾಹನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆರೆ ಏರಿ ತಿರುವಿನಲ್ಲಿ ಅಪಘಾತ ವಲಯವೆಂದು ಸೂಚನಾ ಫಲಕ ಅಳವಡಿಸಬೇಕು. ಕೆರೆ ಏರಿ ಸುತ್ತಲೂ ಅಳವಡಿಸಿರುವ ತಡೆಗೋಡೆಯನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.