ಬೇಲೂರಿನ ಯುವತಿ ಹಾಗೂ ಶಿವಮೊಗ್ಗ ನಿವಾಸಿ ಪ್ರಮೋದ್ಕುಮಾರ್ ಅವರ ಮದುವೆ ಏರ್ಪಾಡಾಗಿತ್ತು. ವರನು ವಧುವಿಗೆ ತಾಳಿ ಕಟ್ಟುವ ವೇಳೆ ಧಾವಿಸಿದ ಪ್ರೇಮಿ, ಹಾಸನದ ಗವೇನಹಳ್ಳಿಯ ನವೀನ್ ಎಂಬಾತ ತಾಳಿ ಕಿತ್ತಿಟ್ಟುಕೊಂಡ. ‘ನಾನು ಹಾಗೂ ಯುವತಿ ಪ್ರೀತಿಸುತ್ತಿದ್ದು, ನನಗೇ ಮದುವೆ ಮಾಡಿಕೊಡಬೇಕು’ ಎಂದು ವಾಗ್ವಾದಕ್ಕಿಳಿದ. ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರಿಂದ, ಪೊಲೀಸರು ಸ್ಥಳಕ್ಕೆ ಬಂದು, ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.