ಅರ್ಧ ತಾಸು ಯಾರ ಮಾತನ್ನೂ ಕೇಳದೆ ಅರೆಬೆತ್ತಲೆ ಹೋರಾಟ ಮಾಡಿದ ಸಕಲೇಶಪುರ ತಾಲ್ಲೂಕಿನ ನಡನಹಳ್ಳಿ ನಿವಾಸಿ ಪ್ರಮೀಳಾ, ‘ತನಗೆ ನಾಲ್ವರು ಪುರುಷರಿಂದ ಅನ್ಯಾಯವಾಗಿದೆ. ಯಾರಿಂದಲೂ ನ್ಯಾಯ ಸಿಕ್ಕಿಲ್ಲ’ ಎಂದು ನಡುರಸ್ತೆಯಲ್ಲೇ ನಿಂತು ಜನರತ್ತ ಕಲ್ಲು ಹಾಗೂ ತೆಂಗಿನ ಕಾಯಿ ತೂರಿ ಆಕ್ರೋಶ ಹೊರ ಹಾಕಿದರು. ನ್ಯಾಯ ಕೊಡಿಸುವಂತೆ ಕುಮಾರಸ್ವಾಮಿಗೆ ಮನವಿ ಮಾಡಿದರು.
‘ನನ್ನ ಅಳಲು ಹೇಳಿಕೊಂಡರೆ ಹುಚ್ಚಿ, ತಲೆ ಕೆಟ್ಟಿದೆ ಎನ್ನುತ್ತಾರೆ. ಆದರೆ ನನಗೆ ಯಾರು ನ್ಯಾಯ ಕೊಡಿಸುತ್ತಾರೆ?, ಎಂದೆಲ್ಲಾ ಪ್ರಶ್ನೆ ಮಾಡಿ ರಸ್ತೆ ಮೇಲೆಲ್ಲಾ ಹೊರಳಾಡಿದರು. ಕೊನೆಗೆ ಮಹಿಳಾ ಪೊಲೀಸರು ಆಕೆಯನ್ನು ಬಲವಂತವಾಗಿ ಆಟೊದಲ್ಲಿ ಠಾಣೆಗೆ ಕರೆದುಕೊಂಡು ಹೋದರು.