ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವ ಪ್ರಯುಕ್ತ ಧರ್ಮಚಕ್ರದ ಬಳಿ ಮೃತ್ತಿಕ ಸಂಗ್ರಹದೊಂದಿಗೆ 8 ದಿನಗಳ ಕಾಲ ಜರುಗುವ ಜಾತ್ರೆಗೆ ಪೀಠಾಧಿಪತಿ ಅಭಿನವ ಚಾರುಕೀರ್ತಿ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು. ಜನರಿಗೆ ಅಕ್ಷತೆ ವಿತರಿಸಿ ಆಶೀರ್ವದಿಸಿದರು.
ಭಂಡಾರಿ ಬಸದಿಯ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಿ, ಮಂಗಳವಾದ್ಯಸಹಿತ ಯಕ್ಷ ಮೆರವಣಿಗೆ ನಡೆಸಲಾಯಿತು. ಮಠದ ಬಸದಿಯಲ್ಲಿ ಚಂದ್ರನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಅಷ್ಟವಿಧಾರ್ಚನೆ ಮಾಡಲಾಯಿತು.