ಒಂದನೇ ತಾರೀಕಿನಂದು ಸರ್ಕಾರಿ ರಜೆ ಇದ್ದರೆ ಮಾರನೇ ದಿನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯವೇತನ, ಅಂಗವಿಕಲ, ವಿಧವಾ ವೇತನ, ಮನಸ್ವಿನಿ, ಮೈತ್ರಿ, ಅಂತ್ಯ ಸಂಸ್ಕಾರ ಸಹಾಯಧನ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಆದರ್ಶ ವಿವಾಹ ಮತ್ತು ಆಮ್ ಆದ್ಮಿ ಯೋಜನೆಯ ಸವಲತ್ತು ಅರ್ಹರು ಪಡೆದುಕೊಳ್ಳಬೇಕು ಎಂದು ಹೇಳಿದರು.