ಇದರಲ್ಲಿ ಕೃಷ್ಣನು ಹುಟ್ಟಿದ ಸಂಕೇತವಾಗಿ ಬಾಲ ಕೃಷ್ಣನ ಕಂಚಿನ ವಿಗ್ರಹವನ್ನು ಮಾತೆಯರಾದ ದೇವಕಿ ಮತ್ತು ಯಶೋದಾ ಅನಂತಪೀಠ ವಾಹನದ ಮೇಲೆ ಇರಿಸಿ ಅಲಂಕರಿಸಲಾಗಿತ್ತು. ಕೃಷ್ಣನಿಗೆ ಜನ್ಮೋತ್ಸವದ ಸಂಕೇತವಾಗಿ ಹಾಲಿನ ಅರ್ಘ್ಯ, ಬಾಲಕೃಷ್ಣನಿಗೆ ಪ್ರಿಯವಾದ ಕಲ್ಲು ಸಕ್ಕರೆ ಬೆರೆಸಿದ ಎಣ್ಣೆ, ಚಕ್ಕುಲಿ, ಕರಿಗಡುಬು, ಪೊಂಗಲ್ಗಳನ್ನು ನಿವೇದಿಸಿ ಅವನ್ನು ತೀರ್ಥ ಪ್ರಸಾದವಾಗಿ ಭಕ್ತರಿಗೆ ವಿತರಿಲಾಯಿತು.