‘ನೆರೆ ರಾಜ್ಯಗಳ ವ್ಯಾಪಾರಿಗಳು ಕೊಬ್ಬರಿ ಖರೀದಿಸಲು ಮುಂದಾಗಿರುವುದು ಸಹಜವಾಗಿಯೇ ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಧಾರಣೆ ₹15,000ರಿಂದ ₹ 16,000 ಗಡಿ ದಾಟುವ ನಿರೀಕ್ಷೆ ಇದೆ. ರೈತರು ಕೊಬ್ಬರಿ ಮಾರಾಟಕ್ಕೆ ಗಡಿಬಿಡಿ ಮಾಡಿಕೊಳ್ಳಬಾರದು’ ಎಂದು ವರ್ತಕ ಲೋಕೇಶ್ ಸಲಹೆ ನೀಡಿದರು.
ನಾಗರ ಪಂಚಮಿ, ವರಮಹಾಲಕ್ಷ್ಮಿ, ಗೌರಿ, ಗಣೇಶ, ಆಯುಧ ಪೂಜೆ, ದೀಪಾವಳಿ ಹಬ್ಬಗಳು ಸಾಲುಸಾಲಾಗಿ ಬಂದಿರುವುದು ಮಾರುಕಟ್ಟೆಯಲ್ಲಿ ಸಹಜವಾಗಿ ಕೊಬ್ಬರಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.