ಸಕಲೇಶಪುರ: ಪುರಸಭೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸೂಪರ್ಸೀಡ್ ಮಾಡಿ, ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ವಕೀಲರಾದ ಪ್ರದೀಪ್ ಮತ್ತು ಮಹಮ್ಮದ್ ಶಫಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಪುರಸಭೆಯ ಖಜಾನೆಯಲ್ಲಿರುವ ಹಣವನ್ನು ಮುಖ್ಯಾಧಿಕಾರಿಯೂ ಸೇರಿದಂತೆ ಆಡಳಿತ ನಡೆಸುತ್ತಿರುವವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವ ಅವರು, ಪುರಸಭೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಸೂಪರ್ಸೀಡ್ ಮಾಡಬೇಕು ಎಂದು ಒತ್ತಾಯಿಸಿದರು.