ಪ್ರಸಕ್ತ ರೈತರು ಕೇವಲ ಕಚ್ಚಾವಸ್ತು ಅಥವಾ ಆಹಾರ ಪದಾರ್ಥಗಳ ಉತ್ಪಾದನೆಯ ಬಗ್ಗೆಯಷ್ಟೇ ಗಮನ ಹರಿಸುತ್ತಿದ್ದಾರೆ. ಅವುಗಳ ಮೌಲ್ಯವರ್ಧನೆ ಮಾಡುವುದು, ಅದನ್ನು ಉದ್ಯಮದ ಸ್ವರೂಪದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ' ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜು, ಕೃಷಿ ಉದ್ದಿಮೆ ಬಂಡವಾಳ ಸಹಾಯ ಯೋಜನೆ ಮಾಹಿತಿ ಶಿಬಿರದ ಉದ್ದೆೀಶಗಳು, ಕೃಷಿ ವ್ಯವಹಾರ ಅಭಿವೃದ್ಧಿ ಮಾರ್ಗಗಳ ಬಗ್ಗೆ ತಿಳಿಸಿದರು.
ತೋಟಗಾರಿಕಾ ಉಪ ನಿರ್ದೇಶಕ ಶಕೀಲ್ ಅಹಮದ್ ಮಾತನಾಡಿ, `ಹಾಸನ ಜಿಲ್ಲೆಯಲ್ಲಿ ಕೃಷಿಯೇ ಜೀವಾಳ. ಇದನ್ನೇ ಬಳಸಿಕೊಂಡು ಪ್ರಗತಿಯ ಪಥದಲ್ಲಿ ಸಾಗಲು ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ಸುತ್ತುನಿಧಿ ನೆರವು ಯೋಜನೆ ರೂಪಿಸಲಾಗಿದ್ದು, ಅದರ ಪ್ರಚಾರಕ್ಕಾಗಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ' ಎಂದರು.
ಎಸ್.ಎಫ್.ಎ.ಸಿ. ಯೋಜನಾಧಿಕಾರಿ ಪಿ.ಕೆ. ಪಾಂಡೆ ಕೇಂದ್ರ ಸರ್ಕಾರದ ಕೃಷಿ ಉದ್ದಿಮೆ ಬಂಡವಾಳ ಸಹಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.