‘ಸಚಿವರಾಗಿದ್ದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಒಡೆದು ಬಡಾವಣೆ ನಿರ್ಮಿಸಿದರು. ಕೆರೆ ಮುಚ್ಚದಂತೆ ಪ್ರಗತಿಪರ ಚಿಂತಕರು, ರೈತರು, ಪರಿಸರ ಪ್ರೇಮಿಗಳು ಸಲಹೆ ನೀಡಿದರೂ ಕೇಳಲಿಲ್ಲ. ನೂತನ ಬಸ್ ನಿಲ್ದಾಣದ ನಂತರ ಇಂದಿಗೂ ಎನ್.ಆರ್.ವೃತ್ತದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ಸಂಬಂಧ ಜೆಡಿಎಸ್ ನಾಯಕರು ಕೇಂದ್ರದ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸದೆ, ಈಗ ಬಿಜೆಪಿ ಯೋಜನೆಗಳ ಕೀರ್ತಿ ಪಡೆಯಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದರು.