‘ಟಿ.ಅಂಕನಹಳ್ಳಿ ಸರ್ವೆ ನಂ. 18 ರಲ್ಲಿ ಐದು ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ನೂರಾರು ಮರಗಳನ್ನು (ನೀಲಗಿರಿ, ಗೊಬ್ಬಳಿ, ಆಲದ ಮರ) ಬೆಳೆಯಲಾಗಿದೆ. ಪಿತ್ರಾರ್ಜಿತವಾಗಿ ಬಂದಂತಹ ಜಮೀನು ನಮ್ಮ ಸ್ವಾಧೀನದಲ್ಲಿ ಇದ್ದು, ಸಾಗುವಳಿ ಮಾಡಲಾಗುತ್ತಿದೆ. ಆದರೆ, ಗ್ರಾಮದ ದೊಡ್ಡೇಗೌಡ ಮತ್ತು ಅವರ ಮಕ್ಕಳು ಜಮೀನನ್ನು ಲಪಟಾಯಿಸಲು ಕುತಂತ್ರ ರೂಪಿಸಿದ್ದಾರೆ’ ಎಂದು ತಿಮ್ಮೇಗೌಡ ಆರೋಪಿಸಿದರು.