ಹೌದು, ಈ ಹಿಂದೆ ನಮ್ಮ ಐದು ಎಕರೆಯಲ್ಲಿ ಅಲ್ಪಾವಧಿ ಬೆಳೆಗಳಾದ ಭತ್ತ, ಗೋವಿಜೋಳ ಮತ್ತಿತರ ಹಸರಣಗಿ (ಕಾಳು, ತರಕಾರಿ ಮತ್ತಿತರ ಬೆಳೆಗಳು) ಬೆಳೆಯುತ್ತಿದ್ದೆನು. ಆದರೆ, 10 ವರ್ಷದ ಹಿಂದೆ ಕೊಳವೆಬಾವಿ ಕೊರೆಯಿಸಿ, 2 ಎಕರೆ ಅಡಿಕೆ ತೋಟ ಮಾಡಿದೆ. ಬಳಿಕ ಮತ್ತೊಂದು ಕೊಳವೆ ಬಾವಿ ಕೊರೆಯಿಸಿ, ಅಡಿಕೆ ಬೆಳೆಯನ್ನು ವಿಸ್ತರಿಸಿದೆನು. ಆರಂಭದಲ್ಲಿ ಸವಾಲುಗಳು ಎದುರಾದರು, ಆದರೂ ಎದೆಗುಂದದೆ ಮುಂದುವರಿದೆನು. ಈಗ ‘ಆದಾಯ’ ಕೈ ಹಿಡಿದಿದೆ ಎಂದು ಪುಟ್ಟಪ್ಪ ಸಂತಸ ವ್ಯಕ್ತಪಡಿಸಿದರು.