‘ಆರು ಆನೆಗಳು ಯಲ್ಲಾಪುರ ಅರಣ್ಯ ಪ್ರದೇಶಗಳಿಂದ ಬಂದಿವೆ ಎನ್ನಲಾಗಿದ್ದು, ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾದರೆ ಸರ್ಕಾರ ಪರಿಹಾರ ನೀಡುತ್ತದೆ. ಆನೆಗಳು ಜನರ ಮೇಲೆ ದಾಳಿ ಮಾಡಬಹುದು. ಹೀಗಾಗಿ ಜಾಗೃತರಾಗಿರಬೇಕು. ಅವುಗಳನ್ನು ಓಡಿಸಲು ಯಲ್ಲಾಪುರ ಅರಣ್ಯ ಪ್ರದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದು, ಅವುಗಳನ್ನು ಓಡಿಸಲು ಎರಡು ಪಡೆಯನ್ನು ಸಿದ್ಧಪಡಿಸಲಾಗಿದೆ. ಬಂಕಾಪೂರ ಹಾಗೂ ಶಿಗ್ಗಾವಿ ಕಡೆಗೆ ಹೋಗದಂತೆ ಸೂಕ್ತ ಬಂದೂಬಸ್ತ್ ಮಾಡಲಾಗಿದ್ದು, ಕಾರ್ಯಾಚರಣೆ ನಡೆದಿದೆ’ ಎಂದು ದುಂಢಸಿ ವಲಯ ಅರಣ್ಯ ಅಧಿಕಾರಿ ರಮೇಶ ಸೇತಸನದಿ ಹೇಳಿದರು.