1952ರಲ್ಲಿ ಕ್ಷೇತ್ರಕ್ಕೆ ಮೊದಲ ಚುನಾವಣೆ ನಡೆದಿದ್ದು, ಆ ಬಳಿಕ (67 ವರ್ಷ) 16 ಬಾರಿ ಆಯ್ಕೆಗಳಾಗಿವೆ. (ಎಫ್.ಎಚ್. ಮೊಹಸೀನ್–5 ಬಾರಿ, ಟಿ.ಆರ್. ನೇಸ್ವಿ, ಮುಜಾಹಿದ್, ಐ.ಜಿ. ಸನದಿ, ಶಿವಕುಮಾರ ಉದಾಸಿ ತಲಾ 2 ಬಾರಿ ಹಾಗೂ ಎ.ಎ.ಅಜೀಜ್ ಸೇಠ್ , ಬಿ.ಎಂ. ಮೆಣಸಿನಕಾಯಿ, ಮಂಜುನಾಥ ಕುನ್ನೂರ ಒಂದು ಬಾರಿ ಆಯ್ಕೆಯಾಗಿದ್ದಾರೆ) ಈ ಬಾರಿ ಯಾರು ಎಂಬುದನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ. ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.