ಜಿಲ್ಲೆಯಲ್ಲಿ ಮರಗಳನ್ನು ಕಡಿಯುವ, ಅರಣ್ಯ ಪ್ರದೇಶ ಒತ್ತುವರಿ, ಸಾಗುವಳಿ ಮಾಡುವ ಬೆಳವಣಿಗೆಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಐದು ಕಡೆ ಕ್ಯಾಂಪ್ ಮಾಡಲು ಅರಣ್ಯ ಇಲಾಖೆ ಯೋಜಿಸಿತ್ತು. ಇಲಾಖಾ ಅನುಮತಿ ಅನ್ವಯ ಮೂರು ಕಡೆಗಳಲ್ಲಿ ಮಂಗಳ ವಾರದಿಂದ ಹಗಲು–ರಾತ್ರಿ ಗಸ್ತು ಹಾಗೂ ‘ಕ್ಯಾಂಪ್’ ಆರಂಭಿಸಿದ್ದಾರೆ. ಈ ಪೈಕಿ ಕಮಲಾಪುರದಲ್ಲಿ ಸೋಮವಾರ ದಿಂದಲೇ ಮೊಕ್ಕಾಂ ಹೂಡಿದ್ದರು.