ಗ್ರಾಮದ ಮರಿಚಿಕ್ಕೇಗೌಡ ಅವರ ಜಮೀನಿನಲ್ಲಿ ಸೆರೆಯಾದ ಐದನೇ ಚಿರತೆ ಇದಾಗಿದೆ. ಜಮೀನಿಗೆ ಹೊಂದಿಕೊಂಡಂತೆ ಅರಣ್ಯ ಪ್ರದೇಶ ಇದ್ದು, ಅಲ್ಲಿಂದ ಚಿರತೆ ಬರುವುದು ಸಾಮಾನ್ಯವಾಗಿದೆ. ಈಚೆಗೆ ಗ್ರಾಮಕ್ಕೆ ರಾತ್ರಿ ವೇಳೆ ಚಿರತೆಗಳು ನುಗ್ಗುತ್ತಿದ್ದು, ಸಾಕಿಪ್ರಾಣಿಗಳನ್ನು ಹೊತ್ತೊಯ್ಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಬೋನು ಇರಿಸಿತ್ತು.