<p><strong>ಬೆಂಗಳೂರು:</strong> ಸುತ್ತಮುತ್ತ ಪ್ರವಾಸಿತಾಣವೆಂದೇ ಗುರುತಿಸಿಕೊಂಡಿರುವ ಜಕ್ಕೂರು ಕೆರೆ ಸ್ವಚ್ಛತೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ನಗರದ ಇತರ ಕೆರೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಈಗ ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಇದರ ಚಿತ್ರಣ ಬದಲಾಗಲಿದೆ.</p>.<p>ಕೆರೆ ಅಭಿವೃದ್ಧಿಗಾಗಿ ಎರಡು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು, ಒಂದು ಸಂಸ್ಥೆ ಬಂಡವಾಳ ಹೂಡಲಿದ್ದು, ಮತ್ತೊಂದು ಸಂಸ್ಥೆ ವಿವಿಧ ಕಾಮಗಾರಿಗಳ ಅನುಷ್ಠಾನದ ಹೊಣೆ ಹೊರಲಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಆರ್ಎಸ್) ಎಲ್ ಆ್ಯಂಡ್ ಟಿ ಸಂಸ್ಥೆ ₹65 ಲಕ್ಷ ದೇಣಿಗೆ ನೀಡಿದ್ದು, ‘ಜಲ ಪೋಷಣ್’ ಸಂಸ್ಥೆಗೆ ಅಭಿವೃದ್ಧಿಯ ಜವಾಬ್ದಾರಿ ವಹಿಸಲಾಗಿದೆ.</p>.<p>160 ಎಕರೆ ವಿಸ್ತೀರ್ಣದ ಈ ಕೆರೆಯ ಸುತ್ತಳತೆ 5 ಕಿ.ಮೀ.ಗಳಷ್ಟಿದೆ. ಇದಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಬೆಳಿಗ್ಗೆ 5ರಿಂದ 9 ಗಂಟೆ ಹಾಗೂ ಸಂಜೆ 4ರಿಂದ 7ಗಂಟೆಯವರೆಗೆ ಸಾರ್ವಜನಿಕರು ಕೆರೆಯ ಸುತ್ತ ವಿಹರಿಸಬಹುದಾಗಿದೆ. ವಾರಾಂತ್ಯದಲ್ಲಿ ನಾಗರಿಕರು ಮಕ್ಕಳು ಕುಟುಂಬದೊಂದಿಗೆ ಬಂದುಕೆರೆ ಬಳಿ ಸಮಯ ಕಳೆಯುತ್ತಾರೆ.</p>.<p>ಕಳೆದ ವರ್ಷ 300ಕ್ಕೂ ಅಧಿಕ ಅಪರೂಪದ ಔಷಧಿ ಸಸ್ಯಗಳನ್ನು ಇಲ್ಲಿ ನೆಟ್ಟು ಬೆಳೆಸಿದ ಕಾರಣ, ಬಗೆಬಗೆಯ ಚಿಟ್ಟೆಗಳು ಬೀಡುಬಿಟ್ಟಿವೆ.</p>.<p>‘2015ರಲ್ಲಿ ಜಲಪೋಷಣ್ ಸಂಸ್ಥೆ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೆರೆಯ ನಿರ್ವಹಣೆ ಮಾಡುತ್ತಿದೆ. ಕೆರೆಯ ಸಮೀಪ ಬಯಲು ರಂಗಮಂದಿರ, ಮಕ್ಕಳ ಆಟದ ಮೈದಾನ, ಚಿಟ್ಟೆ ಉದ್ಯಾನ ನಿರ್ಮಿಸಲಾಗುತ್ತದೆ. ಇಲ್ಲಿರುವ ಸಸ್ಯಗಳಿಗೆ ಜಿಪಿಎಸ್ ಅಳವಡಿಕೆ, 50 ಸೌರವಿದ್ಯುತ್ ಕಂಬ ಅಳವಡಿಸಲಾಗುವುದು. ವನ ಮಹೋತ್ಸವ ಯೋಜನೆಯಡಿ 3 ಸಾವಿರ ಸಸಿಗಳನ್ನು ನೆಡಲು ಉದ್ದೇಶಿಸ<br />ಲಾಗಿದೆ’ ಎಂದು ಜಲ ಪೋಷಣ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಅನ್ನಪೂರ್ಣಾ ಎಸ್.ಕಾಮತ್ ಅವರು<br />‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕೆರೆಯ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ಜಾಗ ಇರಲಿಲ್ಲ. ಅಂದವಾದ ಬಯಲು ರಂಗಮಂದಿರ ನಿರ್ಮಾಣವಾಗ<br />ಲಿದೆ. ಅಷ್ಟೇ ಅಲ್ಲ ಪುಟ್ಟ ಮಕ್ಕಳು ಆಟ ವಾಡಲು ಮರುಬಳಕೆ ವಸ್ತುಗಳಿಂದ ಪುಟ್ಟ ಉದ್ಯಾನ ನಿರ್ಮಾಣವಾಗಲಿದೆ. ಆ್ಯಂಟ್ಹಿಲ್ ಎಂಬ ವಿನ್ಯಾಸ ಸಂಸ್ಥೆಗೆ ಇದರ ಉಸ್ತುವಾರಿ ನೀಡಿದ್ದೇವೆ. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಈ ಎಲ್ಲಾ ಕಾಮಗಾರಿಗಳು ಪೂರ್ಣ<br />ಗೊಳ್ಳಲಿವೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>ಡಿ.8ರವರೆಗೆ ‘ಜಕ್ಕೂರು ಕೆರೆ ಉತ್ಸವ’</strong></p>.<p>ಕೆರೆ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್ 8ರವರೆಗೆ‘ಜಕ್ಕೂರು ಕೆರೆ ಉತ್ಸವ’ ನಡೆಯಲಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಶ್ರಮದಾನ, ಯೋಗ, ದೀಪೋತ್ಸವ ಇರಲಿದ್ದು, ಸಂಪನ್ಮೂಲ ವ್ಯಕ್ತಿಗಳು ಜೀವ ವೈವಿಧ್ಯ ಬಗ್ಗೆ ಕಿರು ಪರಿಚಯ ನೀಡಲಿದ್ದಾರೆ.</p>.<p><strong>ರಾಷ್ಟ್ರ ಪ್ರಶಸ್ತಿ ಗರಿ</strong></p>.<p>ಜಕ್ಕೂರು ಕೆರೆ ಸಂರಕ್ಷಣೆ ಗಾಗಿಜಲಪೋಷಣ್ ಟ್ರಸ್ಟ್ಗೆ 2019ನೇ ಸಾಲಿನ ‘ನ್ಯಾಷನಲ್ ವಾಟರ್ ಮಿಷನ್ ಅವಾರ್ಡ್’ ದೊರೆತಿದೆ.</p>.<p>ರಾಷ್ಟ್ರೀಯ ವಾಟರ್ ಮಿಷನ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಹಾಗೂ ಜಲಶಕ್ತಿ ಸಚಿವಾಲಯವು ಈ ಪ್ರಶಸ್ತಿ ನೀಡಿ ಗೌರವಿಸಿದೆ.</p>.<p>ಪ್ರಶಸ್ತಿಯು ₹1.5 ಲಕ್ಷ ನಗದನ್ನು ಒಳಗೊಂಡಿದೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು.</p>.<p><em><strong>ನಗರದಲ್ಲಿ ಸ್ವಚ್ಛವಾಗಿರುವ ಕೆರೆಯಲ್ಲಿ ಇದೂ ಒಂದು. ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಮಾದರಿ ಕೆರೆಯಾಗಲಿದೆ.</strong></em></p>.<p><em><strong>-ಅನ್ನಪೂರ್ಣಾ ಎಸ್.ಕಾಮತ್,ಜಲ ಪೋಷಣ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸುತ್ತಮುತ್ತ ಪ್ರವಾಸಿತಾಣವೆಂದೇ ಗುರುತಿಸಿಕೊಂಡಿರುವ ಜಕ್ಕೂರು ಕೆರೆ ಸ್ವಚ್ಛತೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ನಗರದ ಇತರ ಕೆರೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಈಗ ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಇದರ ಚಿತ್ರಣ ಬದಲಾಗಲಿದೆ.</p>.<p>ಕೆರೆ ಅಭಿವೃದ್ಧಿಗಾಗಿ ಎರಡು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು, ಒಂದು ಸಂಸ್ಥೆ ಬಂಡವಾಳ ಹೂಡಲಿದ್ದು, ಮತ್ತೊಂದು ಸಂಸ್ಥೆ ವಿವಿಧ ಕಾಮಗಾರಿಗಳ ಅನುಷ್ಠಾನದ ಹೊಣೆ ಹೊರಲಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಆರ್ಎಸ್) ಎಲ್ ಆ್ಯಂಡ್ ಟಿ ಸಂಸ್ಥೆ ₹65 ಲಕ್ಷ ದೇಣಿಗೆ ನೀಡಿದ್ದು, ‘ಜಲ ಪೋಷಣ್’ ಸಂಸ್ಥೆಗೆ ಅಭಿವೃದ್ಧಿಯ ಜವಾಬ್ದಾರಿ ವಹಿಸಲಾಗಿದೆ.</p>.<p>160 ಎಕರೆ ವಿಸ್ತೀರ್ಣದ ಈ ಕೆರೆಯ ಸುತ್ತಳತೆ 5 ಕಿ.ಮೀ.ಗಳಷ್ಟಿದೆ. ಇದಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಬೆಳಿಗ್ಗೆ 5ರಿಂದ 9 ಗಂಟೆ ಹಾಗೂ ಸಂಜೆ 4ರಿಂದ 7ಗಂಟೆಯವರೆಗೆ ಸಾರ್ವಜನಿಕರು ಕೆರೆಯ ಸುತ್ತ ವಿಹರಿಸಬಹುದಾಗಿದೆ. ವಾರಾಂತ್ಯದಲ್ಲಿ ನಾಗರಿಕರು ಮಕ್ಕಳು ಕುಟುಂಬದೊಂದಿಗೆ ಬಂದುಕೆರೆ ಬಳಿ ಸಮಯ ಕಳೆಯುತ್ತಾರೆ.</p>.<p>ಕಳೆದ ವರ್ಷ 300ಕ್ಕೂ ಅಧಿಕ ಅಪರೂಪದ ಔಷಧಿ ಸಸ್ಯಗಳನ್ನು ಇಲ್ಲಿ ನೆಟ್ಟು ಬೆಳೆಸಿದ ಕಾರಣ, ಬಗೆಬಗೆಯ ಚಿಟ್ಟೆಗಳು ಬೀಡುಬಿಟ್ಟಿವೆ.</p>.<p>‘2015ರಲ್ಲಿ ಜಲಪೋಷಣ್ ಸಂಸ್ಥೆ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೆರೆಯ ನಿರ್ವಹಣೆ ಮಾಡುತ್ತಿದೆ. ಕೆರೆಯ ಸಮೀಪ ಬಯಲು ರಂಗಮಂದಿರ, ಮಕ್ಕಳ ಆಟದ ಮೈದಾನ, ಚಿಟ್ಟೆ ಉದ್ಯಾನ ನಿರ್ಮಿಸಲಾಗುತ್ತದೆ. ಇಲ್ಲಿರುವ ಸಸ್ಯಗಳಿಗೆ ಜಿಪಿಎಸ್ ಅಳವಡಿಕೆ, 50 ಸೌರವಿದ್ಯುತ್ ಕಂಬ ಅಳವಡಿಸಲಾಗುವುದು. ವನ ಮಹೋತ್ಸವ ಯೋಜನೆಯಡಿ 3 ಸಾವಿರ ಸಸಿಗಳನ್ನು ನೆಡಲು ಉದ್ದೇಶಿಸ<br />ಲಾಗಿದೆ’ ಎಂದು ಜಲ ಪೋಷಣ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಅನ್ನಪೂರ್ಣಾ ಎಸ್.ಕಾಮತ್ ಅವರು<br />‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕೆರೆಯ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ಜಾಗ ಇರಲಿಲ್ಲ. ಅಂದವಾದ ಬಯಲು ರಂಗಮಂದಿರ ನಿರ್ಮಾಣವಾಗ<br />ಲಿದೆ. ಅಷ್ಟೇ ಅಲ್ಲ ಪುಟ್ಟ ಮಕ್ಕಳು ಆಟ ವಾಡಲು ಮರುಬಳಕೆ ವಸ್ತುಗಳಿಂದ ಪುಟ್ಟ ಉದ್ಯಾನ ನಿರ್ಮಾಣವಾಗಲಿದೆ. ಆ್ಯಂಟ್ಹಿಲ್ ಎಂಬ ವಿನ್ಯಾಸ ಸಂಸ್ಥೆಗೆ ಇದರ ಉಸ್ತುವಾರಿ ನೀಡಿದ್ದೇವೆ. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಈ ಎಲ್ಲಾ ಕಾಮಗಾರಿಗಳು ಪೂರ್ಣ<br />ಗೊಳ್ಳಲಿವೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>ಡಿ.8ರವರೆಗೆ ‘ಜಕ್ಕೂರು ಕೆರೆ ಉತ್ಸವ’</strong></p>.<p>ಕೆರೆ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್ 8ರವರೆಗೆ‘ಜಕ್ಕೂರು ಕೆರೆ ಉತ್ಸವ’ ನಡೆಯಲಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಶ್ರಮದಾನ, ಯೋಗ, ದೀಪೋತ್ಸವ ಇರಲಿದ್ದು, ಸಂಪನ್ಮೂಲ ವ್ಯಕ್ತಿಗಳು ಜೀವ ವೈವಿಧ್ಯ ಬಗ್ಗೆ ಕಿರು ಪರಿಚಯ ನೀಡಲಿದ್ದಾರೆ.</p>.<p><strong>ರಾಷ್ಟ್ರ ಪ್ರಶಸ್ತಿ ಗರಿ</strong></p>.<p>ಜಕ್ಕೂರು ಕೆರೆ ಸಂರಕ್ಷಣೆ ಗಾಗಿಜಲಪೋಷಣ್ ಟ್ರಸ್ಟ್ಗೆ 2019ನೇ ಸಾಲಿನ ‘ನ್ಯಾಷನಲ್ ವಾಟರ್ ಮಿಷನ್ ಅವಾರ್ಡ್’ ದೊರೆತಿದೆ.</p>.<p>ರಾಷ್ಟ್ರೀಯ ವಾಟರ್ ಮಿಷನ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಹಾಗೂ ಜಲಶಕ್ತಿ ಸಚಿವಾಲಯವು ಈ ಪ್ರಶಸ್ತಿ ನೀಡಿ ಗೌರವಿಸಿದೆ.</p>.<p>ಪ್ರಶಸ್ತಿಯು ₹1.5 ಲಕ್ಷ ನಗದನ್ನು ಒಳಗೊಂಡಿದೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು.</p>.<p><em><strong>ನಗರದಲ್ಲಿ ಸ್ವಚ್ಛವಾಗಿರುವ ಕೆರೆಯಲ್ಲಿ ಇದೂ ಒಂದು. ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಮಾದರಿ ಕೆರೆಯಾಗಲಿದೆ.</strong></em></p>.<p><em><strong>-ಅನ್ನಪೂರ್ಣಾ ಎಸ್.ಕಾಮತ್,ಜಲ ಪೋಷಣ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>