ವಾಡಿ: ಗುರುವಾರ ಬಿಟ್ಟುಬಿಡದೇ ಮಳೆ ಸುರಿದಿದ್ದರಿಂದ ಜನಸಾಮಾನ್ಯರು ತೀವ್ರ ಪರದಾಡಿದರು. ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗದೇ ಜನರು ಮನೆಯಲ್ಲಿಯೇ ಉಳಿದರು. ಆದರೆ ಇದರ ಮಧ್ಯೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನರು ಅತ್ತ ಮನೆಯಲ್ಲಿಯೂ ಇರದೇ ಇತ್ತ ಹೊರಗೆ ಬಾರದೇ ತೀವ್ರ ತತ್ತರಿಸಿದರು. ಗುರುವಾರ ಇಡೀ ದಿನ ತಾಂತ್ರಿಕ ಕಾರಣ ನೆಪವೊಡ್ಡಿ ಜೆಸ್ಕಾಂ ಇಲಾಖೆ ವಿದ್ಯುತ್ ಸರಬರಾಜು ನಿಲ್ಲಿಸಿದ್ದ ಕಾರಣ ಜನರು ಇಲಾಖೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.