ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತಪಟ್ಟ ಕೆಕೆಆರ್‌ಟಿಸಿ ಸಿಬ್ಬಂದಿ ಸಂಬಂಧಿಗಳಿಗೆ ತಲಾ ₹50 ಲಕ್ಷ ಪರಿಹಾರ ವಿತರಣೆ

ಅಪಘಾತದಲ್ಲಿ ಮೃತಪಟ್ಟ ಕೆಕೆಆರ್‌ಟಿಸಿ ನೌಕರರು
Published 3 ನವೆಂಬರ್ 2023, 16:55 IST
Last Updated 3 ನವೆಂಬರ್ 2023, 16:55 IST
ಅಕ್ಷರ ಗಾತ್ರ

ಕಲಬುರಗಿ: ಅಪಘಾತದಲ್ಲಿ ಮೃತಪಟ್ಟ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ(ಕೆಕೆಆರ್‌ಟಿಸಿ) ಆರು ಸಿಬ್ಬಂದಿಗಳ ನಾಮನಿರ್ದೇಶಿತ(ನಾಮಿನಿ) ಸದಸ್ಯರಿಗೆ ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾ ಸಹಯೋಗದಲ್ಲಿ ತಲಾ ₹50 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಕೆಕೆಆರ್‌ಟಿಸಿ ತಿಳಿಸಿದೆ.

ಅಪಘಾತದಿಂದಾಗಿ ಆಗುತ್ತಿರುವ ಸಾವು–ನೋವಿನ ಪ್ರಮಾಣ ಗಮನಿಸಿದ್ದ ಕೆಕೆಆರ್‌ಟಿಸಿ, ನೌಕರರು ಅಪಘಾತದಿಂದಾಗಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗನ್ಯೂನತೆಗೆ ಒಳಗಾದಲ್ಲಿ ಸಿಬ್ಬಂದಿಗೆ ಗಣನೀಯ ಮೊತ್ತದಷ್ಟು ಹಣ ಒದಗಿಸಲು 2022ರ ಡಿಸೆಂಬರ್‌ 2ರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆಗೆ ಕಾರ್ಪೊರೇಟ್‌ ಸಂಬಳ ಪ್ಯಾಕೇಜ್‌(ಸಿಎಸ್‌ಪಿ) ಯೋಜನೆ ಸೌಲಭ್ಯ ನೀಡಲು ಒಪ್ಪಂದ ಮಾಡಿಕೊಂಡಿತ್ತು. ಇಂದೊಂದು ಪ್ರೀಮಿಯಂ ರಹಿತ ಉಚಿತ ಪಾಲಿಸಿಯಾಗಿದ್ದು, ಎಸ್‌ಬಿಐನಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿ ಈ ಪಾಲಿಸಿ ಪಡೆಯುತ್ತಾರೆ. ಅದರಂತೆ 2023ರ ಜನವರಿ 1ರಿಂದ ಈತನಕ ಸಂಭವಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗ ಪರಿಹಾರ ಜಮೆ ಮಾಡಲಾಗಿದೆ.

ಬೀದರ್‌ ವಿಭಾಗದವರಾದ ಚಾಲಕ–ಕಂ–ನಿರ್ವಾಹಕ ವಿಶ್ವನಾಥ ಅವರ ಪತ್ನಿ ಪ್ರಮೀಳಾ ಹಾಗೂ ಚಾಲಕ ಶ್ರೀನಿವಾಸ ಅವರ ಪತ್ನಿ ಸವಿತಾ, ಬಳ್ಳಾರಿ ವಿಭಾಗದ ಚಾಲಕ ಜಗನ್ನಾಥ ಅವರ ತಾಯಿ ನಾಗರತ್ನಮ್ಮ, ಕಲಬುರಗಿ ವಿಭಾಗ–2ರ ಚಾಲಕ ಲಾಲ್‌ಹುಸೇನ್‌ ಅವರ ಪತ್ನಿ ಸೂಫಿಯಾಂ ಬೇಗಂ, ಯಾದಗಿರಿ ವಿಭಾಗದ ಚಾಲಕ  ಶಿವಶಂಕರಗೌಡ ಅವರ ಪತ್ನಿ ಗೌರಮ್ಮ ಹಾಗೂ ಕಲಬುರಗಿ ವಿಭಾಗ–1ರ ತಾಂತ್ರಿಕ ಸಹಾಯಕ ಈರಣ್ಣ ಅವರ ಪತ್ನಿ ಶಾರದಾ ಅವರಿಗೆ ತಲಾ ₹50 ಲಕ್ಷದಂತೆ ಒಟ್ಟು ₹3 ಕೋಟಿ ಅಪಘಾತ ವಿಮಾ ಪರಿಹಾರವನ್ನು ಜಮೆ ಮಾಡಲಾಗಿದೆ. ಇದಕ್ಕಾಗಿ ಯಾವುದೇ ಪ್ರೀಮಿಯಂ ಮೊತ್ತ ಪಡೆದಿಲ್ಲ ಎಂದು ಕೆಕೆಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT