ಇನ್ನೂ ಕೆಲವು ರೈತರ ಬೆಳೆ ಪರಿಹಾರ ಉಳಿತಾಯ ಖಾತೆಗೆ ಜಮೆ ಆಗದೇ ಸಾಲದ ಖಾತೆಗೆ ಜಮೆ ಆಗಿದ್ದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ‘ಮಳೆ ಇಲ್ಲ, ಬೆಳೆ ಹಾಳಾಗಿದೆ. ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿದರೆ ನಾವು ಹೇಗೆ ಮಾಡಬೇಕು. ಬ್ಯಾಂಕಿನವರನ್ನು ವಿಚಾರಿಸಿದರೆ ಬೆಳೆ ಸಾಲ ಕಟ್ಟಿ, ಆಮೇಲೆ ನಿಮ್ಮ ಉಳಿತಾಯ ಖಾತೆಗೆ ಪರಿಹಾರದ ಹಣ ಜಮಾ ಮಾಡುತ್ತೇವೆ ಎನ್ನುತ್ತಾರೆ’ ಎಂದು ಸಿದ್ದನೂರು ಗ್ರಾಮದ ರೈತರಾದ ಬೀರಣ್ಣ ಹೇರೂರ, ಮೆಹಬೂಬ್ ಸಾಬ್ ನದಾಫ್, ಭೀಮಶಂಕರ್ ಹೇರೂರು ಹೇಳುತ್ತಾರೆ.