ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದರು ಬರೀ ಕಾಗದದ ಹುಲಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 2134 ಜನರಲ್ಲಿ ಕೋವಿಡ್–19 ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ ಒಂದು ಸಾವಿರ ಜನರು ಬಂಜಾರ ಸಮುದಾಯಕ್ಕೆ ಸೇರಿದವರು. ಅವೈಜ್ಞಾನಿಕವಾಗಿ ಶಾಲೆ, ವಸತಿ ನಿಲಯಗಳಲ್ಲಿ ಬೇರೆ ರಾಜ್ಯಗಳಿಂದ ವಾಪಸಾದವರನ್ನು ಕ್ವಾರಂಟೈನ್ ಮಾಡಲಾಯಿತು. ಒಬ್ಬೊಬ್ಬರನ್ನೂ ಪ್ರತ್ಯೇಕ ಕೋಣೆಯಲ್ಲಿರಿಸುವ ಬದಲು ನೂರಾರು ಜನರನ್ನು ಒಂದೆ ಕೋಣೆಯಲ್ಲಿ ಹಲವು ದಿನಗಳ ಕಾಲ ಇರಿಸಿದ್ದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಿದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆ. ಜೊತೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಸಂಸದರು ಅತಿ ಆಸಕ್ತಿ ವಹಿಸಿ ಜನರನ್ನು ಕರೆತಂದವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಈ ವೈಫಲ್ಯದ ಹೊಣೆ ಹೊತ್ತು ಡಾ.ಉಮೇಶ ಜಾಧವ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.