ಅಫಜಲಪುರ: ‘ಸರ್ಕಾರ ಶೇ.90 ಸಹಾಯ ಧನದಲ್ಲಿ ತುಂತುರು ನೀರಾವರಿ ಪರಿಕರಗಳನ್ನು ನೀಡಲಾಗುತ್ತಿದೆ. ಅವುಗಳನ್ನು ರೈತರು ಸರಿಯಾಗಿ ಬಳಸಿಕೊಂಡು ಅದರ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಅಫಜಲಪುರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರವಿಂದ ಕುಮಾರ ರಾಠೋಡ ತಿಳಿಸಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಪರಿಶಿಷ್ಟ ವರ್ಗದವರಿಗೆ ತುಂತುರು ನೀರಾವರಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಪರಿಕರಗಳನ್ನು ಉಪಯೋಗಿಸಿದ ನಂತರ ನೆರಳಲ್ಲಿ ಕೂಡಿ ಹಾಕಬೇಕು, ಇದರಿಂದ ಹೆಚ್ಚು ಬಾಳಿಕೆ ಬರುತ್ತವೆ.
ಸಹಾಯಧನದಲ್ಲಿ ಒಂದು ಬಾರಿ ಕೃಷಿ ಸೌಲಭ್ಯ ಪಡೆದರೆಮುಂದಿನ 5 – 6 ವರ್ಷಗಳವರೆಗೆ ಸೌಲಭ್ಯ ದೊರೆಯುವದಿಲ್ಲ, ಅದಕ್ಕಾಗಿ ಸರಿಯಾಗಿ ಉಪಯೋಗಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.