ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ: ಕೃಷಿ ಹೊಂಡದೆಡೆಗೆ ರೈತರ ‘ಸುಸ್ಥಿರ’ ನಡಿಗೆ

ಒಂದು ವರ್ಷ 11 ತಿಂಗಳಲ್ಲಿ 718 ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು: ಅಂತರ್ಜಲ ಮಟ್ಟ ಹೆಚ್ಚಳ
Published : 12 ಡಿಸೆಂಬರ್ 2025, 7:15 IST
Last Updated : 12 ಡಿಸೆಂಬರ್ 2025, 7:15 IST
ಫಾಲೋ ಮಾಡಿ
Comments
ಸಮದ್‌ ಪಟೇಲ್‌
ಸಮದ್‌ ಪಟೇಲ್‌
ಉತ್ತಮ ಸ್ಪಂದನೆ: ಸಮದ್ ಪಟೇಲ್
‘ಜಿಲ್ಲೆಯ ಮಳೆಯಾಶ್ರಿತ ಪ್ರದೇಶದ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಹಿಂದೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದವರು ಈ ಯೋಜನೆ ಕಾರಣಕ್ಕೆ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು. ‘ಮಳೆ ನೀರಿನ ಸಂಗ್ರಹ ಮತ್ತು ಅದರ ಉತ್ತಮ ಬಳಕೆಯಿಂದ ಕೃಷಿ ಉತ್ಪಾದಕತೆ ಹೆಚ್ಚುತ್ತದೆ. ಇದರಿಂದ ರೈತರ ಆದಾಯವೂ ವೃದ್ಧಿಸುತ್ತದೆ’ ಎಂದು ಹೇಳಿದರು.
ಕೃಷಿ ಹೊಂಡಕ್ಕೆ ಸಹಾಯಧನ
ರೈತರು ಅಗತ್ಯಕ್ಕೆ ಅನುಗುಣವಾಗಿ 10x10x3 ಮೀ 12x12x3 ಮೀ 15x15x3 ಮೀ 18x18x3 ಮೀ ಹಾಗೂ 30x30x3 ಮೀ ಅಳತೆಯ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬಹುದು.  ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ ಸಾಮಾನ್ಯ ವರ್ಗದ ರೈತರಿಗೆ ನಿರ್ಮಾಣ ವೆಚ್ಚದ ಶೇ 80ರಷ್ಟು ಹಾಗೂ ಪರಿಶಿಷ್ಟ ರೈತರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ತಾಡಪತ್ರಿ ಪಂಪ್‌ಸೆಟ್ ಲಘು ನೀರಾವರಿ ಉಪಕರಣ ಹಾಗೂ ನೆರಳು ಪರದೆಯನ್ನು ನೀಡಲಾಗುತ್ತದೆ.  ಸರ್ಕಾರ ಈ ಯೋಜನೆಯನ್ನು 2014–15ನೇ ಸಾಲಿನಲ್ಲಿ ಜಾರಿ ಮಾಡಿತ್ತು. ಕೆಲ ವರ್ಷ ಅನುದಾನ ಕಡಿತಗೊಳಿಸಿತ್ತು. 2024ರಲ್ಲಿ ಈ ಯೋಜನೆ ಪುನರಾರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT