ಕಲಬುರಗಿ: ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಸಂಚರಿಸುತ್ತಿದ್ದ ಕಾರು ತಾಲ್ಲೂಕಿನ ಪಾಳಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಶಾಸಕರು ಹಾಗೂ ಕಾರಿನಲ್ಲಿದ್ದ ಮುಖಂಡರಿಗೆ ಗಾಯಗಳಾಗಿವೆ.
ಬೆಳಿಗ್ಗೆ ಕಲಬುರಗಿಯಲ್ಲಿಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿದ್ದ ಶಾಸಕರು ನಂತರ ಪಾಳಾ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಶಹಾಬಾದ್ ನಗರಕ್ಕೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಯಿತು.
ಇದರಿಂದಾಗಿ ಶಾಸಕರ ಎದೆ ಭಾಗಕ್ಕೆ ಒಳಪೆಟ್ಟಾಗಿದೆ. ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಮಾಹಿತಿ ಪಡೆದ ಅವರ ಪತ್ನಿ ಜಯಶ್ರೀ ಮತ್ತಿಮಡು ಹಾಗೂ ಪುತ್ರ ಆಕಾಶ್ ಆಸ್ಪತ್ರೆಗೆ ಧಾವಿಸಿದರು.