ಘಟನೆ: 1997ರಲ್ಲಿ ನಡೆದ ಹಡಲಗಿ ಗ್ರಾ.ಪಂ ಅಧ್ಯಕ್ಷ ದತ್ತು ದೊಡ್ಡಮನಿ ಕೊಲೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಕಲಬುರಗಿ ನಗರದಿಂದ ಸ್ವಗ್ರಾಮ ಹಡಲಗಿಗೆ ಮರಳುತ್ತಿದ್ದ ದತ್ತು ಹಡಲಗಿ ಅವರನ್ನು ವೈಜಾಪುರ ಕ್ರಾಸ್ ಬಳಿ ಸುಪಾರಿ ಹಂತಕರಿಂದ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ, ದೀರ್ಘ ಕಾಲ ವಿಚಾರಣೆ ನಡೆದು ಕೆಲವರು ಖುಲಾಸೆಯಾದರು. ಪ್ರಮುಖ ಆರೋಪಿ ಕರೀಂ ಸಾಬ್ ಮಾತ್ರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.