ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

Last Updated 18 ಮೇ 2022, 4:12 IST
ಅಕ್ಷರ ಗಾತ್ರ

ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದ ಹೊರವಲಯದಲ್ಲಿ ಸೋಮವಾರ ರಾತ್ರಿ ಯುವಕನೊಬ್ಬನನ್ನು ಮಾರಕಾಸ್ತ್ರ
ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಶವವನ್ನುಸಾಲೆಬೀರನಹಳ್ಳಿ ಕಡೆಗೆ ಹೋಗುವ ಸೇತುವೆಯ ಹತ್ತಿರ ಎಸೆಯಲಾಗಿದೆ.

ಮರಪಳ್ಳಿ ನಿವಾಸಿ ರವಿ ನಾಟೀಕಾರ (28) ಕೊಲೆಯಾದವರು. ಮುಖ ಹಾಗೂ ದೇಹದ ಇತರ ಭಾಗಗಳಿಗೆ ಕೊಡಲಿಯಿಂದ ಕೊಚ್ಚಿದ ಗಾಯಗಳಾಗಿವೆ. ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರವಿ ಬೀದರ್ ರೈಲ್ವೆ ನಿಲ್ದಾಣದಲ್ಲಿ ಸಾಮಗ್ರಿ ಇಳಿಸುವ ಕೂಲಿ ಕೆಲಸ ಮಾಡಿಕೊಂಡಿದ್ದರು. ಅದೇ ಗ್ರಾಮದ ಸುಜಾತಾ ಎಂಬುವರೊಂದಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ.

ಸೋಮವಾರ ರಾತ್ರಿ ಬೀದರ್‌ನಿಂದ ಬಂದ ನಂತರ ಗ್ರಾಮದಲ್ಲಿರುವ ಪತ್ನಿ ಮನೆಗೆ ಹೋಗಿದ್ದರು. ನಂತರ ಅಪ್ಪ– ಅಮ್ಮ ಜಗಳವಾಡುತ್ತಿದ್ದಾರೆ ಎಂದು ಅವರ ಪುತ್ರಿ ಸುಬ್ಬಣ್ಣ ಎನ್ನುವವರಿಗೆ ತಿಳಿಸಿದ್ದಳು.

ಸ್ಥಳಕ್ಕೆ ಬಂದ ಸುಬ್ಬಣ್ಣ ಬುದ್ಧಿ ಹೇಳಲಿ ಜಗಳ ಬಿಡಿಸಿ ಬಂದಿದ್ದಾಗಿ ಸುಬ್ಬಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ರವಿ ರಾತ್ರಿ ಯಾವಾಗ ಮನೆಯಿಂದ ಹೊರಹೋಗಿದ್ದರು ಎಂದು ಗೊತ್ತಾಗಿಲ್ಲ. ಮಂಗಳವಾರ ಅವರ ಶವ ಸಿಕ್ಕ ಮೇಲೆ ಕೊಲೆಯಾಗಿದ್ದು ಗೊತ್ತಾಗಿದೆ.

ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT