ಬಹುತೇಕ ಸರ್ಕಾರಿ ಶಾಲೆಗಳು, ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಸುಸಜ್ಜಿತ ಕೋಣೆ-ಕಟ್ಟಡಗಳಿಲ್ಲದೇ ಬಳಲುತ್ತಿವೆ. ಹೀಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲಾ ಅಭಿವೃದ್ಧಿಗೆ ದಾನಿಗಳ ಕೊರತೆ ಕಾಡುತ್ತಿದೆ. ಶಿಕ್ಷಣದ ಗುಣಮಟ್ಟ ಮತ್ತು ಶಾಲಾ ಸೌಕರ್ಯ ಚೇತರಿಕೆಗಾಗಿ ಇಲಾಖೆ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ಸವಿತಾನಂದನಾಥ ಸ್ವಾಮೀಜಿ ಕಾರ್ಯ ಮಾದರಿಯಾಗಿದೆ. ಪೂಜ್ಯರ ಈ ಸೇವೆಯಿಂದ ಸಂತಸಗೊಂಡಿರುವ ಮುಖ್ಯಗುರು ರೇಣುಕಾ ಬೇವಿನಮರ ಶ್ರೀಗಳನ್ನು ಶಾಲೆಗೆ ಆಹ್ವಾನಿಸಿ ಅಭಿನಂದಿಸಿದ್ದಾರೆ.ಶಿಕ್ಷಕರಾದ ಶಾಂತಾ ಮಾನ್ವಿ, ಅತಿಥಿ ಶಿಕ್ಷಕರಾದ ಸುಧಾ ಗುತ್ತೇದಾರ, ರಾಧಾ ರಾಠೋಡ, ಸೀತಾಬಾಯಿ ಹೇರೂರ ಪೂಜ್ಯರ ಸೇವೆಯನ್ನು ಶ್ಲಾಘಿಸಿದ್ದಾರೆ.