‘ನಾನು ಖುದ್ದು ಅಂಗವಿಕಲನಾದ್ದರಿಂದ ಪ್ರತ್ಯೇಕವಾಗಿ ಕಲಿಯಲು ಆಗುವ ಮಾನಸಿಕ ಘಾತವನ್ನು ಊಹಿಸಬಲ್ಲೆ. ಅಂಗ ಊಣ ಇದ್ದವರ ಕಲ್ಯಾಣಕ್ಕಾಗಿ ವಿಶ್ವವಿದ್ಯಾಲಯಗಳಲ್ಲೇ ಪ್ರತ್ಯೇಕ ವಿಭಾಗ ತೆರೆಯುವುದು ಸೂಕ್ತ. ಅದಕ್ಕಿಂತ ಮುಖ್ಯವಾಗಿ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ನಲ್ಲಿ ತಲಾ ಒಂದು ಸ್ಥಾನವನ್ನು ಅಂಗವಿಕಲರಿಗಾಗೇ ಮೀಸಲಿಡಬೇಕು. ಇದರಿಂದ ಸರ್ಕಾರಕ್ಕೆ ನಮ್ಮ ಬದುಕು, ಬವಣೆ, ಬೇಡಿಕೆಗಳ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ’ ಎಂದೂ ಅವರು ಕೋರಿದರು.