ಪ್ರಕರಣದ ವಿವರ: ಸ್ಟೇಷನ್ ತಾಂಡಾದ ಸೇವಾಲಾಲ ಗುಡಿ ಹತ್ತಿರ ಇರುವ ಗೋಪಿ ಬಾಮಲಾ ರಾಠೋಡ ಅವರ ಮನೆಯಲ್ಲಿ ಪಡಿತರ ವಿತರಣೆಯ ಅಕ್ಕಿ ಅಕ್ರಮವಾಗಿ ಮಾರುವ ಸಲುವಾಗಿ ಸಂಗ್ರಹ ಮಾಡಲಾಗಿದೆ ಎಂದು ಆಹಾರ ಇಲಾಖೆ ಮೇಲಧಿಕಾರಿ ಮಾಹಿತಿ ಆಧರಿಸಿ ಚಿತ್ತಾಪುರ ಆಹಾರ ಇಲಾಖೆ ಶಿರಸ್ತೇದಾರ್ ಮಲ್ಲಿನಾಥ ಹುನ್ನಳಿ ಅವರು ಗೋಪಿ ರಾಠೋಡ ಮನೆಯ ಮೇಲೆ ದಾಳಿ ಮಾಡಿದಾಗ ಅಕ್ಕಿ ಪತ್ತೆಯಾಯಿತು.