‘ಬಸ್ ಸಮಸ್ಯೆ ಪರಿಹಾರಕ್ಕೆ ಕ್ರಮ’
ಆಳಂದ ಬಸ್ ಘಟಕದಿಂದ ದಿನಾಲೂ ನೂರು ಬಸ್ ಸಂಚರಿಸುತ್ತವೆ. ಹೊಸ ಮಾರ್ಗದಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸ್ ಹೆಚ್ಚಿದ್ದರಿಂದ ಜನದಟ್ಟಣೆ ಇದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಳಂದ ಬಸ್ ಘಟಕದ ವ್ಯವಸ್ಥಾಪಕ ಯೋಗಿರಾಜ ಸರಸಂಬಿ ಪ್ರತಿಕ್ರಿಯಿಸಿದರು.