ದಿನ ಭವಿಷ್ಯ: ಮನಸ್ಸು ಉಲ್ಲಾಸಿತವಾಗಿರುವುದು
Published 21 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಐ.ಟಿ.ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಕಂಡುಬರಲಿದೆ. ಮನೆಯ ಒಳಗೆ ಹಾಗೂ ಹೊರಗೆ ಹೇಗೆ ವರ್ತಿಸುವಿರಿ ಎಂಬುದು ಉತ್ತಮ ಬದುಕಿಗೆ ಕಾರಣವಾಗುತ್ತದೆ.
21 ಅಕ್ಟೋಬರ್ 2024, 18:30 IST
ವೃಷಭ
ಸರಿಯಾಗಿ ಆಲೋಚಿಸಿದ ಬಳಿಕವಷ್ಟೇ ಯಾವುದೇ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ಹೊಸ ಜವಾಬ್ದಾರಿಯೊಂದನ್ನು ನಿಭಾಯಿಸಬೇಕಾಗುವುದು. ದೂರ ಪ್ರಯಾಣವನ್ನು ರಾಹುಕಾಲದ ನಂತರದ ಆರಂಭಿಸಿ.
21 ಅಕ್ಟೋಬರ್ 2024, 18:30 IST
ಮಿಥುನ
ನಿಮ್ಮ ಕೈಕೆಳಗಿನ ನೌಕರರ ನೆರವು ಅಗತ್ಯವೆನಿಸಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮನಸ್ಸು ಉಲ್ಲಾಸಿತವಾಗಿರುವುದು. ದೇಹದ ಉಷ್ಣಾಂಶ ಹೆಚ್ಚಳವಾಗುವ ಲಕ್ಷಣಗಳಿವೆ.
21 ಅಕ್ಟೋಬರ್ 2024, 18:30 IST
ಕರ್ಕಾಟಕ
ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಚರ್ಚಿಸುವುದು ಒಳ್ಳೆಯದು. ಲೇವಾದೇವಿ ವ್ಯವಹಾರಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಯಶಸನ್ನು ಪಡೆಯುವಿರಿ.
21 ಅಕ್ಟೋಬರ್ 2024, 18:30 IST
ಸಿಂಹ
ನಿವೃತ್ತಿ ಬಳಿಕ ಜೀವನದಲ್ಲಿ ನೆಲೆ ಕಂಡ ಸಂತೃಪ್ತಿ ಭಾವ ಮೂಡಲಿದೆ. ಸಹೋದ್ಯೋಗಿಗಳ ಮಾತಿಗೆ ಗೌರವ ಕೊಡುವುದು ಉತ್ತಮ. ಸಂಜೆಯೊಳಗೆ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ.
21 ಅಕ್ಟೋಬರ್ 2024, 18:30 IST
ಕನ್ಯಾ
ಸಹೋದ್ಯೋಗಿಗಳಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಬೇಡಿ. ಕೋರ್ಟ್ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಸಮಯ. ಮದುವೆ ವಿಚಾರವಾಗಿ ನಿಮ್ಮ ನಿರ್ಧಾರವನ್ನು ಹಿರಿಯರಿಗೆ ಸ್ಪಷ್ಟವಾಗಿ ತಿಳಿಸಿರಿ.
21 ಅಕ್ಟೋಬರ್ 2024, 18:30 IST
ತುಲಾ
ವೈದ್ಯಕೀಯ ಖರ್ಚಿನ ಹಣವನ್ನು ವಿಮಾ ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕೌಟುಂಬಿಕ ಕಲಹದಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಕಚೇರಿಯಲ್ಲಿ ಸಹೋದ್ಯೋಗಿಗಳು ಕಿರುಕುಳ ನೀಡಬಹುದು.
21 ಅಕ್ಟೋಬರ್ 2024, 18:30 IST
ವೃಶ್ಚಿಕ
ಸತ್ಯನಾರಾಯಣ ಸ್ವಾಮಿಯ ಆರಾಧನೆಯಿಂದ ಜಟಿಲ ಸಮಸ್ಯೆಗಳು ಕೂಡ ಸುಲಭವಾಗಿ ಬಗೆಹರಿಯಲಿವೆ. ದುರಾಲೋಚನೆಗಳನ್ನು ಬದಲಿಸಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಹಣದ ಹರಿವು ಸರಾಗವಾಗಿರಲಿದೆ.
21 ಅಕ್ಟೋಬರ್ 2024, 18:30 IST
ಧನು
ಹೊಸ ಕಾರ್ಯ ಆರಂಭಿಸುವ ಮುನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು ಒಳಿತು. ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿಯಿಂದ ಹೊರಬನ್ನಿ.
21 ಅಕ್ಟೋಬರ್ 2024, 18:30 IST
ಮಕರ
ನಿರೀಕ್ಷಿತ ಸ್ಥಾನಮಾನಗಳು ಪ್ರಾಪ್ತಿಯಾಗಲಿವೆ. ಸಂಸಾರದಲ್ಲಿ ಸುಖ ಕಂಡುಬರಲಿದೆ. ದೀರ್ಘ ಪ್ರಯಾಣದಿಂದ ದೇಹಾಯಾಸ ಆಗುವುದು. ಬಂಗಾರ ವ್ಯಾಪಾರಿಗಳು ತಾಳ್ಮೆಯನ್ನು ಕಳೆದುಕೊಳ್ಳಬೇಡಿ.
21 ಅಕ್ಟೋಬರ್ 2024, 18:30 IST
ಕುಂಭ
ಕೆಲಸ ಆರಂಭಕ್ಕೆ ಮುನ್ನ ಆಳವಾಗಿ ಯೋಚಿಸದೇ ಮುಂದುವರೆಯುವುದು ಸರಿಯಲ್ಲ. ಸಂತಾನ ಅಪೇಕ್ಷಿಗಳಿಗೆ ಶುಭ ಸಮಾಚಾರ ಕೇಳಿಬರಲಿದೆ. ಗೃಹೋಪಕರಣಗಳ ಖರೀದಿಗೆ ಶುಭದಿನ.
21 ಅಕ್ಟೋಬರ್ 2024, 18:30 IST
ಮೀನ
ಮಕ್ಕಳ ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಿ ನೆಮ್ಮದಿ ಉಂಟಾಗಲಿದೆ. ಬರಬೇಕಾದ ಹಣ ಕೈ ಸೇರಲು ಹೆಚ್ಚಿನ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಂತಹ ಫಲ ಸಿಗದಿರಬಹುದು. ಗಣಪತಿಯನ್ನು ಆರಾಧಿಸಿ.
21 ಅಕ್ಟೋಬರ್ 2024, 18:30 IST