<p><strong>ಕಾಳಗಿ:</strong> ತಾಲ್ಲೂಕಿನ ಕೊರವಿ ಗ್ರಾಮವು ಐತಿಹಾಸಿಕ ಕೊರವಂಜೇಶ್ವರಿದೇವಿ ಮಂದಿರದಿಂದ ಪ್ರಸಿದ್ಧಿ ಪಡೆದಿದೆ. ಆದರೆ, ಈ ಊರಿಗೆ ಬಂದುಹೋಗುವ ಹೊರಗಿನ ಭಕ್ತರಿಗೆ ಇಲ್ಲಿ ಬಸ್ ನಿಲ್ಲಿಸದೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<p>ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಕೊರವಿ ಕ್ರಾಸ್ನ ಕೋಡ್ಲಿ-ಸುಲೇಪೇಟ್ ನಡುವಿನ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಿದ ಗ್ರಾಮಸ್ಥರು; ‘ಅಮಾವಾಸ್ಯೆಗೆ ಅಪಾರ ಭಕ್ತರು ದೇವಿ ದರ್ಶನಕ್ಕೆ ಹರಿದುಬರುತ್ತಾರೆ. ಆದರೆ, ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಕಲಬುರಗಿ, ಚಿಂಚೋಳಿ, ಕಾಳಗಿ ಘಟಕದ ಸರ್ಕಾರಿ ಬಸ್ಗಳು ಇಲ್ಲಿ ನಿಲ್ಲಿಸದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಕೂಡಲೇ ಎಲ್ಲ ತರಹದ ಬಸ್ಗಳು ಇಲ್ಲಿ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.</p>.<p>ಈ ದೇವಸ್ಥಾನವು ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಬೇಕು. ಕೊರವಿಯನ್ನು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿ ಮೇಲ್ದರ್ಜೆಗೇರಿಸಬೇಕು. ಬೆಲೆ ಘೋಷಣೆ ಮಾಡಬೇಕು. ಬೆಳೆ ನಷ್ಟದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಾಕಬೇಕು, ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಪ್ರತಿಭಟನೆಯಿಂದಾಗಿ ಕೆಲಕಾಲ ಕಲಬುರಗಿ-ಚಿಂಚೋಳಿ ಮಾರ್ಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಿವಿಧೆಡೆಯ ಪ್ರಯಾಣಿಕರು ಪರದಾಡಿದರು.</p>.<p>ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಪರಮೇಶ್ವರ ಕಾಂತಾ, ದೇವಿಂದ್ರಪ್ಪ ಪಾಟೀಲ, ಗೋವಿಂದ ರಾಠೋಡ, ಅಶೋಕ ಗುತ್ತೇದಾರ, ದಶರಥ ಕೊರವಿ ಅನೇಕರು ಭಾಗವಹಿಸಿದ್ದರು. ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಕೋಡ್ಲಿ ತಹಶೀಲ್ದಾರ್ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ತಾಲ್ಲೂಕಿನ ಕೊರವಿ ಗ್ರಾಮವು ಐತಿಹಾಸಿಕ ಕೊರವಂಜೇಶ್ವರಿದೇವಿ ಮಂದಿರದಿಂದ ಪ್ರಸಿದ್ಧಿ ಪಡೆದಿದೆ. ಆದರೆ, ಈ ಊರಿಗೆ ಬಂದುಹೋಗುವ ಹೊರಗಿನ ಭಕ್ತರಿಗೆ ಇಲ್ಲಿ ಬಸ್ ನಿಲ್ಲಿಸದೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<p>ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಕೊರವಿ ಕ್ರಾಸ್ನ ಕೋಡ್ಲಿ-ಸುಲೇಪೇಟ್ ನಡುವಿನ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಿದ ಗ್ರಾಮಸ್ಥರು; ‘ಅಮಾವಾಸ್ಯೆಗೆ ಅಪಾರ ಭಕ್ತರು ದೇವಿ ದರ್ಶನಕ್ಕೆ ಹರಿದುಬರುತ್ತಾರೆ. ಆದರೆ, ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಕಲಬುರಗಿ, ಚಿಂಚೋಳಿ, ಕಾಳಗಿ ಘಟಕದ ಸರ್ಕಾರಿ ಬಸ್ಗಳು ಇಲ್ಲಿ ನಿಲ್ಲಿಸದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಕೂಡಲೇ ಎಲ್ಲ ತರಹದ ಬಸ್ಗಳು ಇಲ್ಲಿ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.</p>.<p>ಈ ದೇವಸ್ಥಾನವು ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಬೇಕು. ಕೊರವಿಯನ್ನು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿ ಮೇಲ್ದರ್ಜೆಗೇರಿಸಬೇಕು. ಬೆಲೆ ಘೋಷಣೆ ಮಾಡಬೇಕು. ಬೆಳೆ ನಷ್ಟದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಾಕಬೇಕು, ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಪ್ರತಿಭಟನೆಯಿಂದಾಗಿ ಕೆಲಕಾಲ ಕಲಬುರಗಿ-ಚಿಂಚೋಳಿ ಮಾರ್ಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಿವಿಧೆಡೆಯ ಪ್ರಯಾಣಿಕರು ಪರದಾಡಿದರು.</p>.<p>ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಪರಮೇಶ್ವರ ಕಾಂತಾ, ದೇವಿಂದ್ರಪ್ಪ ಪಾಟೀಲ, ಗೋವಿಂದ ರಾಠೋಡ, ಅಶೋಕ ಗುತ್ತೇದಾರ, ದಶರಥ ಕೊರವಿ ಅನೇಕರು ಭಾಗವಹಿಸಿದ್ದರು. ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಕೋಡ್ಲಿ ತಹಶೀಲ್ದಾರ್ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>