ಅರ್ಹ ಬಡ ದಲಿತರನ್ನು ಗುರುತಿಸಿ ಭೂಮಿ ಹಂಚುವ ಉದ್ದೇಶ ಒಳ್ಳೆಯದು. ಆದರೆ, ನಿರುಪಯುಕ್ತ ಬಂಜರು ಭೂಮಿಯನ್ನು ಹಂಚುವುದು ಯಾವ ನ್ಯಾಯ? ಎಂದ ಅವರು, ಈಗಾಗಲೇ ಗ್ರಾಮದಲ್ಲಿ ಸಾಕಷ್ಟು ಕೃಷಿಯೋಗ್ಯ ಉತ್ತಮ ಭೂಮಿಗಳು ಮಾರಾಟಕ್ಕಿವೆ. ಅವುಗಳನ್ನು ಖರೀದಿಸಿ ದಲಿತರಿಗೆ ಹಂಚಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭೂಮಿ ಹಂಚಿಕೆಯಲ್ಲಿ ಸಮಾನವಾಗಿ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.