ಕಲಬುರ್ಗಿ: ಆರು ತಿಂಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರು ಶ್ರಮಜೀವಿಗಳ ವೇದಿಕೆ ಆಶ್ರಯದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
15 ದಿನಗಳ ಹಿಂದೆ ಸಾಂಕೇತಿಕ ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಕ್ರಮಕೈಗೊಂಡಿಲ್ಲ. ಇದರಿಂದಾಗಿ 350ಕ್ಕೂ ಹೆಚ್ಚು ನೌಕರರು ತೊಂದರೆ ಅನುಭವಿಸುವಂತಾಗಿದೆ. ಇನ್ನೊಂ ದೆಡೆ ಗುತ್ತಿಗೆ ನೌಕರರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ವಾರಾಂತ್ಯ ಹಾಗೂ ಸಾಂದರ್ಭಿಕ ರಜೆಗಳೂ ಸಿಗುತ್ತಿಲ್ಲ. ಆದ್ದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಅಧ್ಯಕ್ಷ ಬಸವರಾಜ ನಂದೂರ, ಉಪಾಧ್ಯಕ್ಷ ರಾಜಕುಮಾರ, ಹಣಮಂತ ಪೂಜಾರಿ, ವಿಜಯಕುಮಾರ ತೆಗನೂರ, ವೆಂಕಟೇಶ ಪದಕಿ, ಸಿದ್ದೇಶ್ವರ ತೆಗನೂರ, ಸಂತೋಷ ಜಾನೆ, ನಾರಾಯಣ ರಂಗದಾಳ, ಖಾಸಿಂ ಶೇಖ್ ಇದ್ದರು.