ಈ ಸಂಧರ್ಭ ಮಾತನಾಡಿದ ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೋಹಿತ್, ‘ಯುವಕರು ಎಲ್ಲೇ ಹೋದರೂ ಮೋದಿ ಮೋದಿ ಎನ್ನುತಾರೆ. ಅಂತವರಿಗೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳುತ್ತಾರೆ. ಇವರು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದು, ಜವಾಬ್ದಾರಿಯಿಂದ ಮಾತನಾಡಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಗಮನಿಸಿ ಅವರಿಗೆ ಒಳೆಯ ಸಂಸ್ಕೃತಿ ಹೇಳಿಕೊಡಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಇವರು ಹೋದಲೆಲ್ಲಾ ಘೇರಾವ್ ಹಾಕಿ ಪ್ರತಿಭಟನೆ ಮಾಡುತ್ತೆವೆ’ ಎಂದು ಎಚ್ಚರಿಸಿದರು.