‘ಒಂದು ಪಂಚಾಯಿತಿಗೆ ಒಂದೇ ಸಹಕಾರ ಸಂಘ ಇರಬೇಕು ಎನ್ನುವ ಸರ್ಕಾರದ ಆದೇಶದಂತೆ ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕುಂದಚೇರಿ, ಪದಕಲ್ಲು, ಸಿಂಗತ್ತೂರು, ಚೆರಂಡೇಟಿ ಗ್ರಾಮವನ್ನು ವಿಭಜಿಸಿ ಬೈಲಾ ತಿದ್ದುಪಡಿಯಾಗಿದೆ. ಆದರೆ, ಭಾಗಮಂಡಲ ಸಂಘದ ಆಡಳಿತ ಮಂಡಳಿ ಆಸ್ತಿ ಮತ್ತು ಜವಾಬ್ದಾರಿಯನ್ನು ವರ್ಗಾಯಿಸದೇ ಸರ್ಕಾರದ ಉದ್ದೇಶ ಈಡೇರಿಕೆಗೆ ಅಡಚಣೆಯಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ದೂರಿದರು.