ಈ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಬಿರುಸಿನ ಮಳೆ ಸುರಿದಿತ್ತು. ಚರ್ಮಣ ಈಚೆಗೆ ಮನೆಗೆ ತಡೆಗೋಡೆ ನಿರ್ಮಿಸಿದ್ದರು. ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ. ತಡೆಗೋಡೆಯ ಅಲ್ಪ ಭಾಗವನ್ನು ವಿದ್ಯುತ್ ಕಂಬ ತಡೆದಿದ್ದು ನಾಪೋಕ್ಲು - ಕಕ್ಕಬೆ ಮುಖ್ಯ ರಸ್ತೆಗೆ ಬೀಳುವ ಮಣ್ಣನ್ನು ತಡೆಹಿಡಿದ ಕಾರಣ ಇನ್ನಷ್ಟು ಸಮಸ್ಯೆ ತಪ್ಪಿದೆ.