ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘15ರಿಂದ (ನಾಳೆಯಿಂದ) 24ರವರೆಗೆ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದ್ದು, 15ರಂದು ಬೆಳಿಗ್ಗೆ 7ಕ್ಕೆ ಶ್ರೀದೇವಿ ವಿಗ್ರಹ ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ಶಕ್ತಿ ಪಾರ್ವತಿಗೆ ಅಭಿಷೇಕ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ, ಮಹಮಂಗಳಾರತಿ ನಡೆಯಲಿದೆ. ಇದರೊಂದಿಗೆ ಹೂವು, ಏಲಕ್ಕಿ, ಮುತ್ತಿನ ಅಲಂಕಾರ ನಡೆಯಲಿದ್ದು, 18ಕ್ಕೆ ಕಾವೇರಿ ಮಾತೆ ಅಲಂಕಾರ ಮಾಡಲಾಗುವುದು. ನಂತರ ಮಯೂರವಾಹಿನಿ, ಮಧುರೆ ಮೀನಾಕ್ಷಿ, ವೀಳ್ಯದೆಲೆ, ನಿಂಬೆಹಣ್ಣು, ಅಡಿಕೆ, ಬೆಳ್ಳಿ ಆಭರಣಗಳ ಅಲಂಕಾರದೊಂದಿಗೆ ಪ್ರತಿದಿನ ವಿಶೇಷ ಪೂಜೆ ನೆರವೇರಿಸಲಾಗುವುದು’ ಎಂದು ಮಾಹಿತಿ ನೀಡಿದರು.