ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿದರು, ಸಮಾಜಶಾಸ್ತ್ರ ಉಪನ್ಯಾಸಕಿ ಎ.ಎನ್. ಗಾಯತ್ರಿ ವಾರ್ಷಿಕ ಸಾಧನಾ ವರದಿ ಮಂಡಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೆಗಡೆ, ವಿದ್ಯಾರ್ಥಿ ಮುಖಂಡರಾದ ಎಂ.ಆರ್. ಲೋಹಿತ್, ಅಧ್ಯಕ್ಷ, ಎಂ.ಡಿ. ಜನನಿ ,ಉಪಾಧ್ಯಕ್ಷೆ, ಕೆ.ಪಿ. ತೃಪ್ತಿ, ಜಂಟಿ ಕಾರ್ಯದರ್ಶಿ, ಎಸ್.ಆರ್. ಸ್ವಪ್ನಾ, ಕ್ರೀಡಾ ಕಾರ್ಯದರ್ಶಿ, ಕಿರಣ್ , ಕ್ರೀಡಾ ಕಾರ್ಯದರ್ಶಿ, ಅರುಣ್ ಕುಮಾರ್ ಹಾಜರಿದ್ದರು.
**
ಪುಸ್ತಕ ವಿದ್ಯಾರ್ಥಿಗೆ ಉತ್ತಮ ಗೆಳೆಯ
'ಪುಸ್ತಕಗಳು ವಿದ್ಯಾರ್ಥಿಗಳಿಗೆ ಉತ್ತಮ ಗೆಳೆಯನಾಗಬಲ್ಲದು, ಪ್ರಸಿದ್ಧ ಲೇಖಕ ರಾಬಿನ್ ಶರ್ಮಾ ಅವರ ’ದಿ ಮಾಂಕ್ ವು ಸೋಲ್ಡ್ ಹಿಸ್ ಫೆರಾರಿ’, ಗುರುಚರಣ್ ದಾಸ್ ಅವರ ’ದಿ ಡಿಫಿಕಲ್ಟಿ ಆಫ್ ಬೀಯಿಂಗ್ ಗುಡ್’ ಮುಂತಾದ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿಗಳು ಅಧ್ಯಾಪಕರ ಬಳಿಯಿರುವ ಅಗಾಧ ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ನಡೆಯಬೇಕು ಎಂದು ಡಾ. ದಯಾನಂದ ನಾಯ್ಕ್ ಹೇಳಿದರು.