ಮ್ಯೂಸಿಯಂ ಉದ್ಘಾಟನೆಯಾದರೆ ತಿಮ್ಮಯ್ಯ ಅವರು ಉಪಯೋಗಿಸಿದ ಪರಿಕರಗಳು, ಸೇನಾ ಸಮವಸ್ತ್ರ, ಸಶಾಸ್ತ್ರಗಳು, ಅವರ ಕುರಿತು ಪುಸ್ತಕ, ಭೂಸೇನೆ, ವಾಯುಸೇನೆ, ನೌಕಾಸೇನೆಯ ಮಾಹಿತಿಯೂ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಅಷ್ಟು ಮಾತ್ರವಲ್ಲದೇ ಯುದ್ಧ ವಿಮಾನವೊಂದನ್ನು ತರುವ ಪ್ರಯತ್ನವೂ ನಡೆಯುತ್ತಿದೆ. ಜಿಲ್ಲಾಡಳಿತದಿಂದ ಕೇಂದ್ರಕ್ಕೆ ಪತ್ರವನ್ನೂ ಬರೆಯಲಾಗಿದೆ.